ಮೊದಲಾರ್ಧ ‘ಗ್ರಾಮಾಯಣ’.. ದ್ವಿತೀಯಾರ್ಧ ‘ರಾಜಕಾರಣ’ ಯಾವುದು ಬೇಡ?

ಮಣ್ಣಿನ ಘಮವಿರುವ ಚಿತ್ರಗಳು ಆ ಪರಿಮಳವನ್ನು ಸೂಸುವುದರತ್ತ ಗಮನಹರಿಸದೆ ಹಳಿ ತಪ್ಪಿದರೆ ಸಿನಿಮಾದ ಮೂಲ ಉದ್ದೇಶವೇ ಮರೆಯಾಗುತ್ತದೆ. ಹಳ್ಳಿಯ ಸೊಗಡಿನ ‘ಗ್ರಾಮಾಯಣ’ವು ಮೊದಲಾರ್ಧದಲ್ಲಿ ಭರವಸೆಯನ್ನು ಮೂಡಿಸಿ, ದ್ವಿತೀಯಾರ್ಧದಲ್ಲಿ ರಾಜಕೀಯ ಭಾಷಣದಂತೆ ಭಾಸವಾಗುತ್ತದೆ. ಸೀನ ಎಂದೇ ಕರೆಯಲ್ಪಡುವ ಶ್ರೀನಿವಾಸ(ವಿನಯ್ ರಾಜ್ಕುಮಾರ್) ದೇವಪುರ ಎಂಬ ಊರಿನಲ್ಲಿದ್ದುಕೊಂಡೇ ಜೀವನ ನಡೆಸುವ ಕನಸು ಕಟ್ಟಿಕೊಂಡಾತ. ಬಹು ಮುಂಗೋಪಿ. ಟ್ರ್ಯಾಕ್ಟರ್ ಖರೀದಿ ಈತನ…
